Powered By Blogger

ಗುರುವಾರ, ನವೆಂಬರ್ 20, 2014

ಭಾರತದ ಇತಿಹಾಸ

ಭಾರತದ ಇತಿಹಾಸ

ಸಂಗಂ ಕಾಲದ ಆಡಳಿತ :-

  • ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
  • ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
  • ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
  • ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
  • ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
  • ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
  • ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
  • ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
  • ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
  • ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
  • ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
  • ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
  • ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
  • ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
  • ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
  • ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
  • ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
  • ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
  • ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
  • ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
  • ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
  • ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
  • ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
  • ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
  • ಚೋಳರ ಪ್ರಮುಖ ಬಂದರು - ಪುಹಾರ್ .
  • ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
  • ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
  • ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
  • ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
  • ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
  • ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
  • ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
  • ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ ಶತಮಾನ ( ಬೆಳ್ಳಿ ನಾಣ್ಯ ) .
  • ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್
  • ಸಂಗಂ ಯುಗದ ಪ್ರಸಿದ್ಧ ಕವಯಿತ್ರಿಗಳು - ಅಮ್ಟೆ ಮತ್ತು ನೆಚ್ಚಿಲ್ಲಿಯರ್
  • ಸಂಗಂ ಸಮಾಜದ ಜನರನ್ನು ಕೇಶಾಲಂಕಾರವನ್ನು ಈ ಹೆಸರಿನಿಂದ ಕರೆಯತ್ತಿದ್ದರು - ಇಂಪಾಲ್ .
  • ಸಂಗಂ ಜನರ ರುಚಿಕರವಾದ ಆಹಾರ - ಪೊಂಗಲ್
  • ಸಂಗಂ ಸಮಾಜದಲ್ಲಿ ಚಿತ್ರಕಲೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಇಯಾಮ್ .
  • ಸಂಗಂ ಜನರ ಪ್ರಮುಖ ಧಾರ್ಮಿಕ ಪದ್ಧತಿ - ಶಿವಾರಾಧನೆ , ಮಾತೃ ದೇವತಾರಾಧನೆ ಮತ್ತು ಲಿಂಗಾರಾಧನೆ ,
  • ಸಂಗಂ ಯುಗದ ಮುಖ್ಯ ದೇವರು - ಮುರುಗನ್ .
  • ಮುರುಗನನ್ನು ತೃಪ್ತಿಪಡಿಸಲು ನಡೆಯುತ್ತಿದ್ದ ನೃತ್ಯ - ವೆಲಂಡಾಲ್ .
  • ಮಧರೈಯಲ್ಲಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಆಚರಿಸುತ್ತಿದ್ದ ಉತ್ಸವ - ಕಾಮನ ಉತ್ಸವ
  • ಸಂಗಂ ಜನರು ದೇವಾಲಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕೋಯಿಲ್
  • ಸಂಗಂ ಜನರ ಆರಂಭ ಕಾಲದ ಪೂಜೆ - ಪತ್ತಿನಿ ( ಪರಿಶುದ್ಧ ಸ್ತ್ರೀಪೂಜೆ )
  • ಸಂಗಂ ಕಾಲದಲ್ಲಿ ಬೌದ್ಧಧರ್ಮದ ಕೇಂದ್ರಗಳು - ನಾಗಪಟ್ಟಣಂ , ಕಾಂಜಿವರಂ ಹಾಗೂ ಮಧುರೈ.
  • ಜೈನ ಧರ್ಮದ ಪ್ರಮುಖ ಕೇಂದ್ರ - ಮಧುರೈ

ಸಂಗಂ ಸಾಹಿತ್ಯ :-

  • ಸಾಹಿತ್ಯದ ದೃಷ್ಠಿಯಿಂದ ಸಂಗಂ ಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ “ ಅಗಸ್ಟಸ್ ಯುಗ “ .
  • “ ಅಗಸ್ಟಸ್ ಯುಗ “ ಎಂದು ಕರೆದವರು - ಡಾ. ವಿ.ಎ.ಸ್ಮಿತ್
  • ಸಂಗಂ ಯುಗದಲ್ಲಿ “ ಪ್ರೆಂಚ್ ಅಕಾಡೆಮಿ “ ಗಳಂತೆ ಕಾರ್ಯನಿರ್ವಹಿಸುತ್ತಿದ್ದವು - ಸಂಗಂ ಕೂಟಗಳು .
  • ಪಾಂಡ್ಯರ ಕಾಲದ ಪ್ರಥಮ ಸಂಗಂ ಅಥವಾ ತಲೈ ಸಂಗಂ ಸ್ಥಾಪನೆಯಾದ ಸ್ಥಳ - ತೀನ್ ಮಧುರೈ .
  • ಪ್ರಥಮ ಸಂಗಂನ ಅಧ್ಯಕ್ಷ - ಅಗಸ್ತ್ಯ .
  • ಎರಡನೇ ಸಂಗಂ ಅಥವಾ ನಡುಸಂಗಂನ ಸ್ಥಾಪಿತವಾದ ಸ್ಥಳ - ಕಟಕಾಪುರ .
  • ಎರಡನೇ ಸಂಗಂನ ಅಧ್ಯಕ್ಷ - ಅಗತ್ತಿಯರ್ರ .
  • ಅತ್ಯಂತ ಪ್ರಾಚೀನ ತಮಿಳು ವ್ಯಾಕರಣ ಗ್ರಂಥ - ತೋಲ್ಯಪ್ಪಿಯಂ
  • ತೋಳಪ್ಪಿಯಂ ವ್ಯಾಕರಣ ಗ್ರಂಥದ ಕರ್ತೃ - ತೊಲ್ ಕಪ್ಪಿಯಲ್
  • ಮೂರನೇ ಸಂಗಂನ ಅಥವಾ ಕವೈ ಸಂಗಂ ಸ್ಥಾಪನೆಯಾದ ಸ್ಥಳ - ಮಧುರೈ .
  • ಮೂರನೇ ಸಂಗಂನಲ್ಲಿ ಅಥಾವ ಕಡೆಯ ಸಂಗಂನ ಅಧ್ಯಕ್ಷ - ನಕ್ಕಿರರ್
  • ಮೂರನೇ ಸಂಗಂನಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು - ಪತ್ತುಪಾಟ್ಟು , ಎಟ್ಟುತೊಗೈ , ಪದಿನೇಲ್ ಕೀಲ್ ಕರಣ ಕುಲ್
  • ಪ್ರಾಚೀನ ತಮಿಳರ ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯನ್ನು ಒಳಗೊಂಡ ಆಧಾರ ಗ್ರಂಥ - ಎಟ್ಟುತ್ತೊಗೈ .
  • ತಿರುಕುರಳ್ ಕೃತಿಯ ಕರ್ತೃ “ ತಿರುವಳ್ಳುವರ್ “
  • ಶಿಲಾಪ್ಪಾದಿಕರಂ ಕೃತಿಯ ಕರ್ತೃ “ ಇಳಂಗೋ ಅಡಿಗಳ್ “
  • “ ತಮಿಳು ನಾಡಿನ ಬೈಬಲ್ “ ಎಂದೆ ಪ್ರಸಿದ್ದವಾಗಿರುವ ಗ್ರಂಥ “ ತಿರುಕುರಳ್ “
  • “ ವೇದಾ ಸಾರವೆಂತಲೂ , ಸಾಸುವೆಯೊಳಗೆ 7 ಕಡಲು ಹುದುಗಿಸಿರುವ ಶ್ರೇಷ್ಠ ಕೃತಿ “ ಎಂದು ಖ್ಯಾತಿಯಾಗಿರುವ ಕೃತಿ - ತಿರುಕುರಳ್
  • “ಮಣಿ ಮಕೈಲೇ “ ಕೃತಿಯ ಕರ್ತೃ - ಸತ್ತನಾರ್ ( ಚಿತ್ತನೈ ಸತ್ತನಾರ್ )
  • ಜೀವಿಕ ಚಿಂತಾಮಣಿ ಕೃತಿಯ ಕರ್ತೃ “ ತಿರುತಕ್ಕ ದೇವರ್ “ ( ಜೈನ ಕೃತಿ )
  • ತಮಿಳು ಸಾಹಿತ್ಯದ ಸುವರ್ಣಯುಗ - ಸಂಗಂ ಯುಗ .

Extra Tips :-

  • ಪ್ರಾಚೀನ ತಮಿಳು ಸಾಹಿತ್ಯಕ್ಕೆ ಆಧಾರ - ಸಂಗಂ ವಾಯಜ್ಞಂ
  • ತಮಿಳು ದೇಶದ ಮೇಲೆ ಪ್ರಪ್ರಥಮವಾಗಿ ಸಾರ್ವಭೌಮತ್ವ ಸಾಧಿಸಿದ ಚೋಳರಾಜ - ಕುಕಾಲ ಚೋಳನ್ .
  • ಮಲಬಾರ್ ತೀರದಲ್ಲಿ ಚೇರ ಸೈರ್ವಭೌಮತ್ವವನ್ನು ನೆಲೆಗೊಳಿಸಿದ ರಾಜ - ನೆಡು ಚೇರನ್ ಆಂಡಾನ್ .
  • ಉತ್ತರ ಭಾರತದ ಗಂಗಾನದಿ ಪ್ರಾಂತ್ಯದವರೆಗೆ ಚೈತ್ರ ಯಾತ್ರೆ ನಡೆಸಿದ ರಾಜ - ಸೆಂಗುಟ್ಟು ವಾನ್ .
  • “ ಪರಮೇಶ್ವರ “ ಎಂಬ ಬಿರುದು ಧರಿಸಿದ್ದ ಪಾಂಡ್ಯ ಅರಸ - ನೆಡುಂ ಚೆಳಿಯನ್
  • “ ತಿರುಮೂರು ಕಡುಪುಡಯ್ “ ಕೃತಿಯ ಕರ್ತೃ - ನಕ್ಕಿರರ್.
  • ಕ್ರಿ.ಪೂ.ಎರಡನೇ ಶತಮಾನದಲ್ಲಿ ತಮಿಳು ಭಾಷೆಗೆ ಬಳಸಿದ ಲಿಪಿ - ಬ್ರಾಹ್ಮಿ.
  • ಸಂಗಂ ಯುಗದಲ್ಲಿ ಮುಖ್ಯ ಉಧ್ಯಮ - ವಸ್ತ್ರ ಉದ್ಯಮ .
  • ಕರಿಕಾಳ ಚೋಳನ ವಿಜಯಗಳನ್ನ ವಿವರಿಸಿದ ಗ್ರಂಥ - ಪಟ್ಟಿನ ಪಾಲೈ .
  • ಕನ್ನಗಿ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಿದ ಸಿಂಹಳದ ರಾಜ - ಗಜ ಬಾಹು
  • ಲಲಿತ ಕಲೆಗಳ ಕುರಿತು ಬೆಳಕು ಚೆಲ್ಲುವ ತಮಿಳು ಕೃತಿ - ಮಣಿಮೇಖಲೈ .
  • ಸಂಗರ್ ಕೊಲಾಂಡಿಯಾ ಪದದ ಅರ್ಥ - ವರ್ತಕ ಶಾಕೆಗಳು .
  • “ ಮಧುರೈ ಕಂಜಿ “ ಕೃತಿಯ ಕರ್ತೃ - ಮಾಗುಂಡಿ ಮರುಧನ್.
  • ಸಂಗಂ ಯುಗದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆ ಯನ್ನು ಈ ಹೆಸರಿನಿಂದ ಕರೆಯುವರು - ತುಡಿಯನ್.
  • ಸಂಗಂ ಯುಗದಲ್ಲಿ ರಾಜನ ಆಸ್ಥಾನವನ್ನು ಈ ಹೆಸರಿನಿಂದ ಕರೆಯುವರು - ಮನ್ನಂ.
  • ತೊಂಟಿ,ಮುರಿಜನ್ ಬಂದರು ಪಟ್ಟಣಗಳು ಈ ಸಂಗಂ ರಾಜ್ಯದಲ್ಲಿದ್ದವು - ಚೇರನ್
  • ಪಾಂಡ್ಯರ ರಾಜಧಾನಿ ಮಧುರೈ ಈ ನದಿಯ ದಂಡೆಯಲ್ಲಿದೇ - ವೈಗೈ ನದಿ .
  • ಈ ಮಾರ್ಗದ ಮೂಲಕ ಭಾರತ ಈಜಿಪ್ಟ್ ನೊಂದಿಗೆ ವ್ಯಾಪಾರ ಸಂಬಂಧಗಳನ್ನು ನಡೆಸುತ್ತಿತ್ತು -ಕೆಂಪು ಸಮುದ್ರ ಮಾರ್ಗ .
  • ಕರಿಕಾಳ ಚೋಳನ ತಂದೆಯ ಹೆಸರು - ಇಲಾಂಜಿತ್ ಸೇನಿ.
  • ಸಂಗಂ ಯುಗದಲ್ಲಿ ಗೆಲುವಿನ ದೇವತೆಯಾಗಿ ಪೂಜಿಸುತ್ತಿದ್ದ ದೇವತೆ - ಕೊರವೈ.
  • ಸಂಗಂ ಯುಗದಲ್ಲಿ ವೆಲ್ವಿ ಪದದ ಅರ್ಥ - ಯಜ್ಞ.
  • ಕೊರಗೈ ಬಂದರು ಈ ನದಿಯ ತೀರದಲ್ಲಿತ್ತು - ತಾಂಬ್ರವರ್ಣಿ .
  • ಕರ್ನಾಟಕ ಪದವನ್ನು ಪರಿಚಯಿಸುವ ತಮಿಳು ಗ್ರಂಥ - ಶಿಲಪ್ಪಾದಿಕಾರಂ ಹಾಗೂ ತೋಳ್ಳಯಿಪ್ಪಿ .
  • ಶಿಲಪ್ಪಾದಿಕಾರಂ ಕರ್ನಾಟಕ ಪದವನ್ನು ಈ ಹೆಸರಿನಿಂದ ಪರಿಚಯಿಸಿದೆ - ಕರುನಾಡರ್ .
  • ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ .
  • ಚೋಳರ ಶಾಸನಗಳು ಕರ್ನಾಟಕ ಪದವನ್ನು ಹೀಗೆ ಸೂಚಿಸಿದೆ - ಕನ್ನಾಟ ಅಥವಾ ಕನ್ನಾಟಕ .
  • “ ಮಧುರೈ ಕೊಂಡ “ ಎಂಬ ಬಿರುದುಳ್ಳ ಅರಸ - ಒಂದನೇ ಪರಾಂತಕ ಚೋಳ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ